ಮೌನವೆಂಬ ಸಾಗರದ ಅಂಚಲಿ ನಿಂತಿಹ ಎನಗೆ,
ಒಲವಿನ ಚಂದಿರ ಮೂಡಿದಾಗ ಅಂತರಂಗ ಉಲಿಯಿತು,
ಕಣ್ಣಲಿ ಆ ಚೆಲುವಿನ ಚಿತ್ರಪಟ ನಲಿದಾಡಿತು,
ಮತ್ತೆ ಮುಳುಗುವನೆಂಬ ಕಹಿ ಸತ್ಯ ಸುಳಿದಾಡಿತು,
ರೆಪ್ಪೆ ಕಪ್ಪೆ ಚಿಪ್ಪುಗಳಂತೆ ಒಂದನ್ನೊಂದು ಅಪ್ಪಿಕೊಂಡಿತು,
ಮನದ ಭಾವದ ರಸೀತಿಯಂತೆ ನಾಲ್ಕು ಹನಿಗಳು ನಯನಗಳ ತೋಯ್ದನ್ಥಾಯ್ತು.
-ವರುಣ್ ಕಂಜರ್ಪಣೆ.
Subscribe to:
Post Comments (Atom)
1 comment:
konege Preetiya raseeti sikkita?
:)
Post a Comment